ಕಿಡ್ನಿಯ ಬಗ್ಗೆ ವಿವರಗಳು? ಹಿಂದೂ ವಿಶ್ವ ಕಿಡ್ನಿ ದಿನ!!

ಎಲ್ಲರಿಗೂ ನಮಸ್ಕಾರಗಳು,
ಅತ್ಯಧಿನಿಕ ವೈದ್ಯಕೀಯ ಸೌಲಭ್ಯಗಳು ತಂತ್ರಜ್ಞಾನ ಪ್ರಗತಿಯ ಫಲ ಜನಸಾಮಾನ್ಯರ ಕೈಗೂ ಸಿಗುವಂತಿರಬೇಕು. ಈ ಬಾರಿಯ ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲರಿಗೂ ಮೂತ್ರಪಿಂಡದ ಆರೋಗ್ಯ ಮುಂದುವರಿದ ಹಾರೈಕೆ ಮತ್ತು ಸೂಕ್ತ ಔಷದೋ ಪಾಚರಕ್ಕೆ ಎಲ್ಲರಿಗೂ ಸಮಾನ ಅವಕಾಶ ಎಂಬುದು ಈ ವರ್ಷದ ಘೋಷ ವಾಕ್ಯವಾಗಿದೆ.
ಮಧುಮೇಹ ಅಧಿಕ ರಕ್ತದ ಒತ್ತಡ ಜೊತೆಗೆ ವೈದ್ಯರ ಸಲಹೆ ಪಡೆಯದೆ ನೋವು ನಿವಾರಕ ಮಾತ್ರೆಗಳನ್ನು ಸೇವನೆ ಮಾಡುವುದು, ಮೂತ್ರಪಿಂಡ ಕಾಯಿಲೆಗೆ ಪ್ರಮುಖ ಕಾರಣವಾಗಿದೆ. ಮೂತ್ರಪಿಂಡ ಕಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಅದರಲ್ಲೇ ನಿಯಂತ್ರಣಕ್ಕೆ ಹೆಚ್ಚು ಹೊತ್ತು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರೋಗಿಗಳಿಗೆ ಔಷದ ನೀಡುವಾಗ ವೈದ್ಯರು ಸಹ ಎಚ್ಚರಿಕೆ ವಹಿಸಬೇಕಿದೆ. ಅಂದರೆ ಕಿಡ್ನಿ ಆರೋಗ್ಯಕ್ಕೆ ಸಮಸ್ಯೆ ಆಗದ ಪ್ರಮಾಣದಲ್ಲಿ ಔಷಧ ನೀಡಬೇಕಾಗುತ್ತದೆ. ಅದೇ ರೀತಿಯಲ್ಲಿ ರೋಗಿಗಳು ಸಹ ವೈದ್ಯರ ಸಲಹೆ ಇಲ್ಲದೆ ನೋವು ನಿವಾರಕ ಸೇರಿ ಯಾವುದೇ ಔಷದ ಮಾತ್ರೆಗಳನ್ನು ಸೇವಿಸದಂತೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ವಯಸ್ಸಾದವರು, ಮದುಮಯಿಗಳು, ಅಧಿಕ ರಕ್ತದ ಒತ್ತಡ, ಹೊಂದಿರುವವರು ಸೋಂಕುಗಳಿಂದ ಬಳಲುತ್ತಿರುವವರು, ಗರ್ಭಿಣಿಯರು ,ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ವಾಂತಿಬೇದಿ ಆಗುತ್ತಿದ್ದರೆ ಅಂತವರು ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಾರದು. ಸೇವಿಸಿದಲ್ಲಿ ಇವು ಕಿಡ್ನಿ ಸೇರಿದಂತೆ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ .
ಕಿಡ್ನಿ ಕಸಿಯ ಅಗತ್ಯತೆ?
ಕಿಡ್ನಿ ಸಂಪೂರ್ಣ ಹಾಳಾಗಿ ಡಯಾಲಿಸಿಸ್ ಗೆ ಒಳಪಡಿಸಿ ಲಾಭದ ಸಂದರ್ಭದಲ್ಲಿ ಕಿಡ್ನಿ ಕಸಿ ಮಾಡಿಸುವುದು ಅನಿವಾರ್ಯ ಹಾಗೂ ಅಂತಿಮ ಪರಿಹಾರ. ಒಂದು ಮೂತ್ರಪಿಂಡ ಆರೋಗ್ಯವಾಗಿದ್ದರೆ ಸಮಸ್ಯೆ ಇಲ್ಲ , ಎರಡು ಹಾಳಾಗಿದ್ದರೆ ದಾನಿಗಳಿಂದ ಅಥವಾ ರಕ್ತ ಸಂಬಂಧಿ ಅಥವಾ ಮೆದುಳು ನಿಷ್ಕ್ರಿಯೆಗೊಂಡ ವ್ಯಕ್ತಿ ಇವರಿಂದ ಪಡೆದ ಮೂತ್ರಪಿಂಡವನ್ನು ಕಸಿ ಮಾಡಲಾಗುತ್ತದೆ. ಬಹಳಷ್ಟು ಬೆಳವಣಿಗೆ ಹೊಂದಿರುವುದರಿಂದ ಬೇರೆ ಬೇರೆ ರಕ್ತದ ಗುಂಪು ಹೊಂದಿದ್ದರು ಮೂತ್ರಪಿಂಡ ಕಸಿ ಮಾಡ ಬಹುದಾಗಿದೆ.
ಸಮಸ್ಯೆಗಳಿಗೆ ಕಾರಣಗಳು
ಮಧುಮೇಹ ,ಕಾಮಾಲೆ ,ಅನಿಯಂತ್ರಿತ ರಕ್ತದ ಒತ್ತಡ ಸೋಂಕುಗಳು, ಧೂಮಪಾನ ,ಮಧ್ಯಪಾನ ,ಸಮರ್ಪಕ ಆಹಾರ ಸೇವನೆ ,ಕಡಿಮೆ ನೀರು ಕುಡಿಯುವುದು, ಕಿಡ್ನಿಯಲ್ಲಿ ಕಲ್ಲು ,ಅನುವಂಶಿಯ ಕಾಯಿಲೆಗಳು, ಹುಟ್ಟಿನಿಂದ ಬರುವ ಕಾಯಿಲೆಗಳು ಮೂತ್ರನಾಳ ಕಟ್ಟಿಕೊಳ್ಳುವುದು ,ತೀವ್ರ ವಾಂತಿ ಮತ್ತು ಬೇದಿಯಾದ ಸಂದರ್ಭದಲ್ಲಿ ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಸೂಕ್ತ ಚಿಕಿತ್ಸೆಗೆ ಇರುವ ಅಡೆತಡೆಗಳು
ನಮ್ಮಲ್ಲಿ ದೀರ್ಘಕಾಲದ ಮೂತ್ರಪಿಂಡ ವೈಫಲ್ಯದ ಬಗೆ ಜನರಲ್ಲಿರುವ ಅರಿವಿನ ಕೊರತೆ ನೂತನ ಚಿಕಿತ್ಸಾ ಪದ್ಧತಿಗಳ ಬಗ್ಗೆ ಮಾಹಿತಿ ಮತ್ತು ಜ್ಞಾನ ಇಲ್ಲದಿರುವುದು. ಮೂತ್ರಪಿಂಡ ತಜ್ಞರ ಕೊರತೆ ದುಬಾರಿ ಚಿಕಿತ್ಸಾಹಿತ್ಯ ಸಾರಥಿಕ ಆರೋಗ್ಯ ಸೇವೆಗಳ ಕೊರತೆ ಆರಂಭದಲ್ಲಿ ಕಾಯಿಲೆ ಪತ್ತೆ ಮಾಡದಿರುವ ಕಾರಣಗಳಿಂದ ಮೂತ್ರಪಿಂಡ ಸಮಸ್ಯೆಯ ಪ್ರಕರಣಗಳು ಹೆಚ್ಚುತ್ತಿದೆ. ಹೀಗಾಗಿ ಜನರು ಈ ಬಗ್ಗೆ ಸ್ವಯಂ ಜಾಗೃತರಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಕೆಲಸಾಮಾನ್ಯ ಹಾಗೂ ಸರಳ ಪರೀಕ್ಷೆಗಳ ಮೂಲಕ ಕಿಡ್ನಿ ಆರೋಗ್ಯದ ಮಾಹಿತಿ ಪಡೆದು ಆರಂಭದಲ್ಲೇ ಸಮಸ್ಯೆ ಬಗೆ ತಿಳಿದರೆ ಸೂಕ್ತ ಚಿಕಿತ್ಸೆಯೊಂದಿಗೆ ಪರಿಹಾರ ಕಂಡುಕೊಳ್ಳಬಹುದು.
ಕಾರ್ಯವಿಧಾನ
ಎಲ್ಲರಲ್ಲೂ ಎರಡು ಮೂತ್ರಪಿಂಡಗಳಿರುತ್ತವೆ. ಇದರಲ್ಲಿ ಆರೋಗ್ಯಕರವಾದ ಒಂದು ಮೂತ್ರಪಿಂಡವಿದ್ದರೂ ಮನುಷ್ಯ ಉತ್ತಮ ಜೀವನ ನಡೆಸಬಹುದು. ಈ ಮೂತ್ರಪಿಂಡಗಳು ದೇಹದಲ್ಲಿನ ಅನಗತ್ಯ ಹಾಗೂ ಹೆಚ್ಚುವರಿ ತ್ಯಾಜ್ಯವನ್ನು ಹೊರಹಾಕಿ ಸ್ವಚ್ಛಗೊಳಿಸುತ್ತದೆ. ವಿಟಮಿನ್ ಡಿ ಉತ್ಪಾದಿಸಿ ಮೂಳೆಗೆ ಶಕ್ತಿ ತುಂಬುತ್ತದೆ .ಕೆಂಪು ರಕ್ತ ಕಣಗಳನ್ನು ಅಭಿವೃದ್ಧಿಪಡಿಸಿ ದೇಹದಲ್ಲಿ ರಕ್ತದ ಮಟ್ಟವನ್ನು ಹೆಚ್ಚಿಸುತ್ತವೆ. ರೆಮಿನ್ ಎಂಬ ಅಂಶವು ರಕ್ತದ ಒತ್ತಡಗಳನ್ನು ಹಾಗೂ ನೀರು ಲವಣ ಮತ್ತು ಆಮ್ಲ ಅಂಶವನ್ನು ನಿಯಂತ್ರಿಸುತ್ತದೆ.
ಕಾಯಿಲೆಯ ಲಕ್ಷಣಗಳು
*ತೀವ್ರವಾದ ತಲೆನೋವು ತಲೆ ಸುತ್ತುವಿಕೆ
*ಮೂತ್ರದಲ್ಲಿ ಗಾಢವಾದ ಬಣ್ಣ
*ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು
*ಕಣ್ಣಿನ ಸುತ್ತ ಹೂತ ಕಾಣಿಸಿಕೊಳ್ಳುವುದು
*ಹಸಿವಾಗದಿರುವುದು ಮತ್ತು ಕಿರಿಕಿರಿ
*ಮೊಣಕಾಲು ಮತ್ತು ಪಾದಗಳಲ್ಲಿ ಹೂತ
*ವಾಕರಿಕೆ ಅಥವಾ ವಾಂತಿ ಆಗುವುದು
*ಮೂತ್ರ ವಿಸರ್ಜನೆ ವೇಳೆ ಉರಿಯುವುದು
*ಮೂತ್ರದಲ್ಲಿ ನೋರೆ ಆಗುರತ್ತ ಬರುವುದು
*ತೂಕ ಕಡಿಮೆ ಆಗುವುದು ಮೈಯಲ್ಲಿ ತುರಿಕೆ
ಸರಳ ಪರೀಕ್ಷೆಗಳು
ಕಾಲಕಾಲಕ್ಕೆ ಮೂತ್ರದಲ್ಲಿ ಪ್ರೋಟೀನ್ ಮತ್ತು ಅಲ್ಯೂಮಿನ್ ಅಂಶ ಎಷ್ಟು ಪ್ರಮಾಣದಲ್ಲಿ ಹೊರ ಹೋಗುತ್ತದೆ ಎಂಬುದನ್ನು ಪರೀಕ್ಷೆ ಮಾಡಿಸಬೇಕು. ವಯಸ್ಕರಲ್ಲಿ ದಿನಕ್ಕೆ 150 ಮಿಲಿ ಗ್ರಾಂ ಪ್ರೋಟೀನ್ ಮೂತ್ರ ವಿಸರ್ಜನೆ ಮೂಲಕ ಹೊರ ಹೋಗುತ್ತದೆ. ಇದಕ್ಕಿಂತ ಹೆಚ್ಚು ಹೋಗಬಾರದು, ಇದರೊಂದಿಗೆ ಅಲ್ಯೂಮಿನಿಯ30 ಮಿಲಿ ಗ್ರಾಂಗಿಂತ ಹೆಚ್ಚು ಹೋಗಬಾರದು. ಇದು ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಕಿಡ್ನಿ ಮತ್ತು ಹೃದಯಕ್ಕೆ ಸಮಸ್ಯೆ ಉಂಟುಮಾಡುತ್ತದೆ. ಇದನ್ನು ಔಷದ ಮೂಲಕ ಸರಿಪಡಿಸಬಹುದು ಜೊತೆಗೆ ಮಧುಮೇಹ ರಕ್ತದ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇಷ್ಟು ಮಾಡಿದರೆ ಬಹುತೇಕ ಸಮಸ್ಯೆ ತಡೆಯಬಹುದಾಗಿದೆ.
ನಮ್ಮ ಮೂತ್ರಪಿಂಡಗಳು ಸರಿಯಾಗಿವೆ ಎಂಬ ಘೋಷಣೆಯೊಂದಿಗೆ 2006ರಲ್ಲಿ ಇಂಟರ್ನ್ಯಾಷನಲ್ ಸೊಸೈಟಿ ಆಫ್ ನೆಪ್ರೋಲಜಿ ಮತ್ತು ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಕಿಡ್ನಿ ಫೌಂಡೇಶನ್ ಸಹಯೋಗದಲ್ಲಿ ವಿಶ್ವ ಮೂತ್ರಪಿಂಡ ದಿನ ಆಚರಿಸಲಾಯಿತು. ಕಿಡ್ನಿ ಆರೋಗ್ಯ ಹಾಗೂ ಸಂಬಂಧಿತ ಸಮಸ್ಯೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದೊಂದಿಗೆ 66 ದೇಶಗಳಲ್ಲಿ ಒಟ್ಟಿಗೆ ಈ ದಿನ ಆಚರಿಸಲಾಯಿತು. ಇದೀಗ ಎಂಬತ್ತಕ್ಕೂ ಅಧಿಕ ದೇಶಗಳಲ್ಲಿ ವಿಶ್ವ ಮೂತ್ರಪಿಂಡ ದಿನ ಆಚರಣೆ ಮೂಲಕ ಕಿಡ್ನಿ ಆರೋಗ್ಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಧನ್ಯವಾದಗಳು.....,

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚೀನಾದಲ್ಲಿ ಶುರು ಆಯ್ತು ಹೊಸ ತಳಿ ನ್ಯೂಮೋನಿಯಾ ಆತಂಕ

ಕಂಡಲ್ಲೆಲ್ಲ ಕಲ್ಲಂಗಡಿ ದರ್ಬಾರ್!

ಕೆಪಿಸಿಎಲ್ ಉದ್ಯೋಗಾಂಕ್ಷಿಗಳಿಗೆ ನಿರಾಸೆ!?