ಬೆಂಗಳೂರಿಗೆ ಕುಡಿಯುವ ನೀರಿನ ಬೇಗೆ?
ಎಲ್ಲರಿಗೂನಮಸ್ಕಾರಗಳು, ಬೇಸಿಗೆಯಲ್ಲಿ ರಾಜಧಾನಿ ನೀರಿನ ಆಹಾಕಾರದ ಮುನ್ಸೂಚನೆ ದೊರೆತಿದೆ . ನೀರಿನ ವಿಚಾರದಲ್ಲಿ ಬೆಂಗಳೂರು ಅತ್ಯಂತ ದುರ್ಬಲ ನಗರ ಎನಿಸಿದ್ದು, ಕೃಷ್ಣರಾಜಸಾಗರ ಅಣೆಕಟ್ಟೆಯ ನೀರಿನ ಮಟ್ಟ 92 ಅಡಿಗೆ ಕುಸಿಯುತ್ತಿದ್ದಂತೆ ಇಲ್ಲಿ ನೀರಿನ ಆತಂಕ ಶುರುವಾಗಿದೆ. ಪರ್ಯಾಯ ಮೂಲಗಳತ್ತ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿದೆ. ಅಪಾರ್ಟ್ಮೆಂಟ್, ವಾಣಿಜ್ಯ ಸಂಸ್ಥೆಗಳು ಪ್ರತಿನಿತ್ಯ ಟ್ಯಾಂಕರ್ ಗಳಲ್ಲಿ ನೀರು ತರಿಸುತ್ತಿದ್ದು ನೀರಿನ ಅಗತ್ಯತೆ ಮತ್ತು ಲಭ್ಯತೆಯ ಕುರಿತು ಈ ವರದಿಗಳ ಮೂಲಕ ಮಾಹಿತಿ ವಿಶ್ಲೇಷಣೆ ನಡೆಸಲಿದೆ. ಕೃಷ್ಣರಾಜಸಾಗರ ಅಣೆಕಟ್ಟೆ ನೀರಿನ ಮಟ್ಟ 92 ಅಡಿಗೆ ಕುಸಿಯುತ್ತಿದ್ದಂತೆ ಬೆಂಗಳೂರು ಜನತೆಗೆ ಕುಡಿಯುವ ನೀರಿನ ಆತಂಕ ಎದುರಾಗಿದೆ. ದಿನದಿಂದ ದಿನಕ್ಕೆ ವಿವಿಧ ಬಡಾವಣೆಗಳಲ್ಲಿ ಪೂರೈಕೆ ಆಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ದೈನಂದಿನ ಬಳಕೆಗೆ ಬೋರ್ವೆಲ್ ಅಥವಾ ಅನ್ಯ ಜಲ ಮೂಲದ ಮೇಲೆ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದನ್ನರಿತ ಖಾಸಗಿ ಟ್ಯಾಂಕರ್ ಮಾಲೀಕರು ದುಪ್ಪಟ್ಟು ಹಣ ವಸೂಲು ಮಾಡುತ್ತಿರುವುದು ಬಡ ಜನರಿಗೆ ಹೊರೆಯಾಗಿ ಪರಿಣಮಿಸಿದೆ. ಕಾವೇರಿ ನೀರನ್ನು ಕುಡಿಯುವುದಕ್ಕಾಗಿ ಮಾತ್ರ ಬಳಸಬೇಕಿದೆ. ವಿದ್ಯುತ್ ಕಣ್ಣ ಮುಚ್ಚಾಲೆಯಿಂದಾಗಿ ನೀರಿನ ಪಂಪಿಂಗ್ ಪೂರೈಕೆ ಮೇಲು ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಂಗಳೂರಿನ ಜನಸಂಖ್ಯೆ ಕೋಟಿ ದಾಟಿದ್ದು, ನಿತ್ಯ 1400 ಎಂಎಲ್ಡಿ ನೀರಿನ ಅಗ