ಪೋಸ್ಟ್‌ಗಳು

ಜನವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬೆಂಗಳೂರಿಗೆ ಕುಡಿಯುವ ನೀರಿನ ಬೇಗೆ?

ಇಮೇಜ್
ಎಲ್ಲರಿಗೂನಮಸ್ಕಾರಗಳು, ಬೇಸಿಗೆಯಲ್ಲಿ ರಾಜಧಾನಿ ನೀರಿನ ಆಹಾಕಾರದ ಮುನ್ಸೂಚನೆ ದೊರೆತಿದೆ . ನೀರಿನ ವಿಚಾರದಲ್ಲಿ ಬೆಂಗಳೂರು ಅತ್ಯಂತ ದುರ್ಬಲ ನಗರ ಎನಿಸಿದ್ದು, ಕೃಷ್ಣರಾಜಸಾಗರ ಅಣೆಕಟ್ಟೆಯ ನೀರಿನ ಮಟ್ಟ 92 ಅಡಿಗೆ ಕುಸಿಯುತ್ತಿದ್ದಂತೆ  ಇಲ್ಲಿ ನೀರಿನ ಆತಂಕ ಶುರುವಾಗಿದೆ. ಪರ್ಯಾಯ ಮೂಲಗಳತ್ತ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿದೆ. ಅಪಾರ್ಟ್ಮೆಂಟ್, ವಾಣಿಜ್ಯ ಸಂಸ್ಥೆಗಳು ಪ್ರತಿನಿತ್ಯ ಟ್ಯಾಂಕರ್ ಗಳಲ್ಲಿ ನೀರು ತರಿಸುತ್ತಿದ್ದು ನೀರಿನ ಅಗತ್ಯತೆ ಮತ್ತು ಲಭ್ಯತೆಯ ಕುರಿತು ಈ ವರದಿಗಳ ಮೂಲಕ ಮಾಹಿತಿ ವಿಶ್ಲೇಷಣೆ ನಡೆಸಲಿದೆ. ಕೃಷ್ಣರಾಜಸಾಗರ ಅಣೆಕಟ್ಟೆ ನೀರಿನ ಮಟ್ಟ 92 ಅಡಿಗೆ ಕುಸಿಯುತ್ತಿದ್ದಂತೆ ಬೆಂಗಳೂರು ಜನತೆಗೆ ಕುಡಿಯುವ ನೀರಿನ ಆತಂಕ ಎದುರಾಗಿದೆ. ದಿನದಿಂದ ದಿನಕ್ಕೆ ವಿವಿಧ ಬಡಾವಣೆಗಳಲ್ಲಿ ಪೂರೈಕೆ ಆಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ದೈನಂದಿನ ಬಳಕೆಗೆ ಬೋರ್ವೆಲ್ ಅಥವಾ ಅನ್ಯ ಜಲ ಮೂಲದ ಮೇಲೆ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದನ್ನರಿತ ಖಾಸಗಿ ಟ್ಯಾಂಕರ್ ಮಾಲೀಕರು ದುಪ್ಪಟ್ಟು ಹಣ ವಸೂಲು ಮಾಡುತ್ತಿರುವುದು ಬಡ ಜನರಿಗೆ ಹೊರೆಯಾಗಿ ಪರಿಣಮಿಸಿದೆ.  ಕಾವೇರಿ ನೀರನ್ನು ಕುಡಿಯುವುದಕ್ಕಾಗಿ ಮಾತ್ರ ಬಳಸಬೇಕಿದೆ. ವಿದ್ಯುತ್ ಕಣ್ಣ ಮುಚ್ಚಾಲೆಯಿಂದಾಗಿ ನೀರಿನ ಪಂಪಿಂಗ್ ಪೂರೈಕೆ ಮೇಲು ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಂಗಳೂರಿನ ಜನಸಂಖ್ಯೆ ಕೋಟಿ ದಾಟಿದ್ದು, ನಿತ್ಯ 1400 ಎಂಎಲ್‌ಡಿ ನೀರಿನ ಅಗ

ವೈದ್ಯರು, ಸಿಬ್ಬಂದಿ ಹುದ್ದೆ ಖಾಲಿ??! ಕೇಂದ್ರ ರ,ಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್?

ಎಲ್ಲರಿಗೂ ನಮಸ್ಕಾರಗಳು, ಬೆಂಗಳೂರು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೇರಿ 16,000ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಹುದ್ದೆಗಳು ಖಾಲಿ ಇರುವುದು ಹಾಗೂ ಮೂಲಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೆ ಗೊಳಿಸಿ ಆದೇಶಿಸಿದೆ. ಮಾಧ್ಯಮಗಳ ವರದಿ ಆಧರಿಸಿ ದಾಖಲಿಸಿಕೊಂಡಿದ್ದ, ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿವರಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿಂದ ವಿಭಾಗೀಯ ಪೀಠ ಮಂಗಳವಾರ ಆದೇಶ ಮಾಡಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಜ್ಯ ಆರೋಗ್ಯ ಇಲಾಖೆಗೆ ನೋಟಿಸ್ ಜಾರಿ ಮಾಡಿ ,ಆಕ್ಷೇಪಣೆ ಸಲ್ಲಿಸುವಂತೆಯೂ ಸೂಚನೆ ನೀಡಿ ವಿಚಾರಣೆ ಮುಂದುವರಿತು. ಪ್ರಕರಣದ ಹಿನ್ನೆಲೆ ಏನು? ಭಾರತೀಯ ವಾಣಿಜ್ಯೋದ್ಯಮ ಮಹಾ ಸಂಘಗಳ ಒಕ್ಕೂಟ 2023ರ ಆಗಸ್ಟ್ 11ರಂದು ಕರ್ನಾಟಕ ವಿಶ್ವನಾಡಿ ಒಂದು ಟ್ರೀಲಿಯನ್ ಆರ್ಥಿಕತೆ ವರದಿ ಬಿಡುಗಡೆ ಮಾಡಿದೆ. ಗ್ರಾಮೀಣ ಭಾಗದಲ್ಲಿ 454 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆ ಇತ್ತು ಉತ್ತಮ ವೈದ್ಯಕೀಯ ಸೇವೆ ಲಭ್ಯವಾಗಬೇಕಿದೆ. ರಾಜ್ಯದಲ್ಲಿ 723 ಎಂಬಿಬಿಎಸ್ ವೈದ್ಯರು 200492 ಶುಶ್ರೂಷಕೀಯರು 1517 ಲ್ಯಾಪ್ ಟೆಕ್ನಿಷಿಯನ್ಸ್ 1512 ಫಾರ್ಮಸಿ ಸಿಬ್ಬಂದಿ 1,752 ಸಹಾಯಕರು ಹಾಗೂ 3253 ಗ್ರೂಪ್ ಡಿ ನೌಕರರ ಕೊರತೆ ಇದೆ ಎಂದು ಪ

ಅಯೋಧ್ಯೆ ರಾಮಮಂದಿರಕ್ಕೆ ನಟ ಪ್ರಭಾಸ್ 50 ಕೋಟಿ ರೂ. ದೇಣಿಗೆ? ಊಟದ ಖರ್ಚು ಪೂರ್ತಿ ಯಂಗ್ ರೆಬೆಲ್ ಸ್ಟಾರ್‌ದಾ?

ಎಲ್ಲರಿಗೂ ನಮಸ್ಕಾರಗಳು, ಬಹು ನಿರೀಕ್ಷಿತ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ ಇದೇ ತಿಂಗಳ 22ಕ್ಕೆ ಸಮೀಪಿಸುತ್ತಿದ್ದಂತೆ ಕೋಟ್ಯಂತರ ಭಾರತೀಯರಲ್ಲಿ ಉತ್ಸಾಹ ಮುಗಿಲು ಮುಟ್ಟಿದೆ. ದೇಶದ ಮೂಲೆ ಮೂಲೆಗಳಿಂದ ಭಕ್ತರು ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದಾರೆ. ರಾಮಮಂದಿರ ತೆರೆಯುವ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸುಮಾರು 300 ಸ್ಥಳಗಳಿಗೆ ಅನ್ನದಾನ ವ್ಯವಸ್ಥೆ ಮಾಡಲಾಗುತ್ತಿದೆ. ದೇವಾಲಯ ತೆರೆಯುವ ದಿನದಂದು ಪ್ರಭಾಸ್ ದೇಣಿಗೆ ನೀಡಲಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಅಯೋಧ್ಯೆ ಪ್ರತಿಷ್ಠಾ ದಿನದಂದು ಆಹಾರದ ವೆಚ್ಚ ಬರೋಬ್ಬರಿ 50 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಪ್ರಭಾಸ್ ಸಂಪೂರ್ಣ ವೆಚ್ಚವನ್ನು ಭರಿಸಲು ನಿರ್ಧರಿಸುವ ಮೂಲಕ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ಭಕ್ತರಿಗೆ ಔತಣವನ್ನು ಏರ್ಪಡಿಸುವ ವ್ಯವಸ್ಥೆ ವಹಿಸಿಕೊಂಡಿದ್ದಾರೆ . ಸುಮಾರು 50 ಕೋಟಿ ರೂಪಾಯಿಗಳ ಅಂದಾಜು ವೆಚ್ಚದೊಂದಿಗೆ ನಟನು ಊಟಕ್ಕೆ ಹಣವನ್ನು ನೀಡುತ್ತಾರೆ ಎನ್ನಲಾಗಿದೆ. ಆದರೆ, ಇದು ಸುಳ್ಳು ಸುದ್ದಿ ಎಂದು ರಾಷ್ಟ್ರೀಯ ಮಾಧ್ಯಮವೊಂದು, ನಟನ ತಂಡದೊಂದಿಗೆ ಮಾತನಾಡಿ ಸ್ಪಷ್ಟಪಡಿಸಿದೆ.  ಪ್ರಭಾಸ್ ಅತ್ಯಂತ ಜನಪ್ರಿಯ ನಟ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಅದಕ್ಕೂ ಮಿಗಿಲಾಗಿ ಅನೇಕ ಒಳ್ಳೆಯ ಗುಣಗಳನ್ನು ಹೊಂದಿರುವ ವ್ಯಕ್ತಿ. ರೆಬೆಲ್ ಸ್ಟಾರ್ ಕೃಷ್ಣಂ ರಾಜು ಮತ್ತು ಅವರ ಉತ್ತರಾಧಿಕಾರಿ ಯಂಗ್ ರ

ಕೆಪಿಸಿಎಲ್ ಉದ್ಯೋಗಾಂಕ್ಷಿಗಳಿಗೆ ನಿರಾಸೆ!?

ಎಲ್ಲರಿಗೂ ನಮಸ್ಕಾರಗಳು, ಕೆಪಿಸಿಎಲ್ ಉದ್ಯೆಕಾಂಕ್ಷಿಗಳಿಗೆ ನಿರಾಸೆ ಖಾಲಿ ಹುದ್ದೆಗಳ ಸಂಖ್ಯೆ 1705 ಇಳಿಕೆಯಾಗಿದೆ. ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಐದರಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಅದೇ ರೀತಿ ಸರ್ಕಾರಿ ಹುದ್ದೆಗಳ ಬರ್ತಿ ಭರವಸೆ ಈಡೇರಿಸಲಿದೆ, ಎಂಬ ನಿರೀಕ್ಷೆಯಲ್ಲಿದ್ದವರಿಗೆ ಆಗತ್ತ ಕಾದಿದೆ. ಪ್ರತಿಷ್ಠಿತ ಸಾರ್ವಜನಿಕ ಉದ್ಯಮಗಳಲ್ಲಿ ಒಂದಾದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಉದ್ಯೋಗ ಅಂಶಗಳನ್ನು ಸಮಿತಿ ವರದಿ ನಿರಾಸೆಗೊಳಿಸಿದೆ .ಲಭ್ಯ ಅತ್ಯಾಧುನಿಕ ತಾಂತ್ರಿಕತೆ ಬಳಸಿಕೊಂಡು ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ಮಾನದಂಡ ನಿಯಮಾವಳಿ ಪ್ರಕಾರ ಮಾನವ ಸಂಪನ್ಮೂಲ ಬಲ ತಗ್ಗಿಸುವುದರತ್ತ ವರದಿ ಗಮನ ಸೆಳೆದಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದ ಉನ್ನತಮಟ್ಟದ ಉಪಸಮಿತಿ ಶಾಪುರ್ ಜಲ ವಿದ್ಯುತ್ ಸೌರ ಸೇರಿ ವಿವಿಧ ಯೋಜನಾ ಸ್ಥಾವರಗಳ ವೃಂದಬಲದ ಅಧ್ಯಯನ ಮಾಡಿದೆ. ಕಾರ್ಯ ಮತ್ತು ಪಾಲನೆಯ ಕೆಲಸದ ಭಾರ ಕ್ಷಮತೆ ಸ್ಥಾಪಿತ ಸಾಮರ್ಥ್ಯವನ್ನು ತುಲನೆ ಮಾಡಿರುವುದರಿಂದ ಹಾಲಿ ವೃಂದ ಬಲವನ್ನು ಅರ್ಧದಷ್ಟು ಕಡಿತಗೊಳಿಸಲು ಉಪಸಮಿತಿ ಶಿಫಾರಸು ಮಾಡಿದೆ. ಕಡಿತದ ಕಾರಣಗಳು ಬಹುತೇಕ ಜಲವಿತ್ತಿದಾರಗಳಲ್ಲಿ ಯಾಂತ್ರಿಕೀಕರಣ ವ್ಯವಸ್ಥೆ ಇದೆ .ಬಳ್ಳಾರಿ ಶಾಕೋದ್ಪನ ವಿದ್ಯುತ್ ಕೇಂದ್ರ ಕಲ್ಲಿದ್ದಲು ನಿರ್ವಾಣರಂಗಣ ಹೊರಗುತ್ತಿಗೆ ನೀಡಲಾಗಿದೆ. ಅರಮರ ಶಾಕೋದ್ಪನ್ನ ವಿದ್ಯುತ್ ಕೇಂದ್ರದ ಪಾಲನೆ ಮತ್ತು ನಿರ್ವಹಣೆಯನ್ನು ಹೈದರಾಬಾ

ಐಐಐಎಸ್‌ಸಿ ಇಂದ ಹೊಸ ಕೋವಿಡ್ ಲಸಿಕೆ!

ಎಲ್ಲರಿಗೂ ನಮಸ್ಕಾರಗಳು, ಕಳೆದ ಮೂರು ವರ್ಷದಿಂದ ಕೊರೋನಾ ಎಂಬ ಕಾಯಿಲೆಯು ನಮ್ಮ ದೇಶಕ್ಕೆ ಕಾಲಿಟ್ಟು ಸುಮಾರು ಜನರು ಸಾವನ್ನಪ್ಪಿದ್ದಾರೆ , ಮತ್ತು ಕೆಲವರು ಕೋವಿಡ್ ಇಂದ ಪಚ್ಚಾತಾಪದಲ್ಲಿ ಇದ್ದಾರೆ. ಹೀಗೆ ಕಳೆದ ಮೂರು ವರ್ಷದಿಂದ ನಡೆಯುತ್ತಿದೆ. ಈಗ ಹೊಸ ವೈರಸ್ ನಮ್ಮ ದೇಶದಲ್ಲಿ ಕಾಲಿಟ್ಟಿದ್ದು ಜನರಲ್ಲಿ ಆತಂಕದ ಮೇಲೆ ಆತಂಕವನ್ನು ಸೃಷ್ಟಿಸುತ್ತಿದೆ. ನಾವು ಎಷ್ಟೇ ಜಾಗೃತರಾಗಿದ್ದರು ಅದು ನಮ್ಮನ್ನು ಬಿಡುತ್ತಿಲ್ಲ. ತುಂಬಾ ಜನರು ಅದರಿಂದ ನೋವನ್ನು ಅನುಭವಿಸಿದ್ದಾರೆ. ಭಾರತದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುವ ಮುಂಚಿನಿಂದಲೂ ಲಸಿಕೆಯ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದೇವು. ಈ ವೇಳೆ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನದಿಂದಲೂ ಧನ ಸಹಾಯ ದೊರೆತಿತ್ತು. ಶೈತ್ಯಗಾರರ ಅಗತ್ಯವಿಲ್ಲದೆ ಸಹಜ ವಾತಾವರಣದಲ್ಲೂ ಶೇಖರಿಸಿ ಇಡಬಹುದಾದ , ಶಾಖವನ್ನು ತಡೆದುಕೊಳ್ಳುವ ಕೋವಿಡ್ ಲಸಿಕೆಯನು ಭಾರತೀಯ ವಿಜ್ಞಾನ ಸಂಸ್ಥೆಯ ಐಐಐಎಸ್‌ಸಿ ವಿಜ್ಞಾನಿಗಳು   ಸಂಶೋಧಿಸಿದ್ದಾರೆ. ಇದು ಖಾಲಿ ಇರುವ ಕೋವಿಡ್ ವೈರಾಣುಗಳು ಮಾತ್ರವಲ್ಲದೆ ,ಭವಿಷ್ಯದಲ್ಲಿನ ರೂಪಾಂತರ ವಿರುದ್ಧವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಹೇಳಿದ್ದಾರೆ. ಸಾಂಕ್ರಾಮಿಕ ಕಾಣಿಸಿಕೊಂಡ ಆರಂಭದಿಂದಲೂ ಇಂತದೊಂದು ಸಂಶೋಧನೆಯಲ್ಲಿ ಬಯೋಪಿನಿಕ್ಸ್ ಘಟಕದ ಪ್ರಾಧ್ಯಾಪಕ ರಾಘವ ವರದರಾಜ ತೊಡಗಿಕೊಂಡಿದ್ದರು. ಕಾಲಿಕದಲ್ಲಿ ಈ ಕುರಿತ ಸಂಶೋಧನ ವರದಿ ಪ್ರಕಟವಾಗಿದೆ. ಕೋವಿಡ್ ಲಸಿಕೆಯಾಗಿ ಬಳಕೆಯಾಗಬಲ್ಲ

ಚಿಕನ್ ಬಿರಿಯಾನಿಯಲ್ಲಿ ಪೀಸ್ ಗಳೇ ಇರಲಿಲ್ಲ.....!!!

ಎಲ್ಲರಿಗೂ ನಮಸ್ಕಾರ, ಚಿಕನ್ ಬಿರಿಯಾನಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ?? ನಾನ್ ವೆಜ್ ಪ್ರಿಯರು ತುಂಬಾ ಇಷ್ಟ ಪಟ್ಟು ತಿನ್ನುವ ಆಹಾರವೆಂದರೆ ಬಿರಿಯಾನಿ. ಚಿಕನ್ ಬಿರಿಯಾನಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ?? ನಾನ್ ವೆಜ್ ಪ್ರಿಯರು ತುಂಬಾ ಇಷ್ಟ ಪಟ್ಟು ತಿನ್ನುವ ಆಹಾರವೆಂದರೆ ಬಿರಿಯಾನಿ. ಅದೇ ರೀತಿ ರೆಸ್ಟೋರೆಂಟ್ ಗೆ ಹೋಗಿದ್ದ  ಇಲ್ಲೊಬ್ಬ ಗ್ರಾಹಕ ಬಿರಿಯಾನಿಯಲ್ಲಿ ಪ್ಲೀಸ್ ಇರಲಿಲ್ಲವೆಂದು ಕೋರ್ಟ್ ಮೆಟ್ಟಿಲೇರಿ ಗೆದ್ದು ಬಂದಿದ್ದಾನೆ. ಮಾಂಸವಿಲ್ಲದ ಚಿಕನ್ ಬಿರಿಯಾನಿ ನೀಡಿದ ರೆಸ್ಟೋರೆಂಟ್ ಗೆ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ. ಅಲ್ಲದೆ ಯಾವುದೇ ವಕೀಲರಿಲ್ಲದೆ ವಾದ ಮಂಡಿಸಿದ ಗ್ರಾಹಕನಿಗೆ ,150ರೂ ಮರುಪಾವತಿ ಮಾಡುವುದರ ಜೊತೆಗೆ ಸಾವಿರ ರೂಗಳನ್ನು ದಂಡವನ್ನಾಗಿ ಪಾವತಿಸುವಂತೆ ರೆಸ್ಟೋರೆಂಟ್ ಗೆ ಆದೇಶಿಸಿದೆ. 2023ರ ಏಪ್ರಿಲ್ 2 ರಂದು ನಾಗರಬಾವಿ ನಿವಾಸಿ ಕೃಷ್ಣಪ್ಪ ಎಂಬಾತ ಮನೆಯಲ್ಲಿ ಅಡುಗೆ ಅನಿಲ ಖಾಲಿಯಾದ ಕಾರಣ ಹೆಂಡತಿಯೊಂದಿಗೆ ಐಟಿಐ ಲೇಔಟ್ ನ ಹೋಟೆಲ್ ಗೆ ತೆರಳಿ ಚಿಕನ್ ಬಿರಿಯಾನಿ ಆರ್ಡರ್ ಮಾಡಿ 150ರೂ ಪಾವತಿಸಿ ಪಾರ್ಸೆಲ್ ತಂದಿದ್ದರು. ಪಾರ್ಸೆಲ್ ತೆಗೆದು ನೋಡಿದರೆ ಅದರಲ್ಲಿ ಒಂದೇ ಒಂದು ಚಿಕನ್ ಪೀಸ್ ಇರಲಿಲ್ಲ ,ಬದಲಾಗಿ ಬಿರಿಯಾನಿ ಅನ್ನ ನೀಡಲಾಗಿತ್ತು .ಕೂಡಲೇ ಕೃಷ್ಣಪ್ಪ ರೆಸ್ಟೋರೆಂಟ್ ಗೆ ಕರೆ ಮಾಡಿದ್ದರು, ಅವರು ಬೇರೆ ಬಿರಿಯಾನಿ ಪಾರ್ಸಲ್ ತಂದು ಕೊಡುವುದು ಎಂದು ತಿಳಿಸಿದರು .ಸತತ ಎರಡು ಗಂಟೆಗಳ ಕಾಲ ಪಾರ್ಸೆಲ್ ಗಾಗಿ

ಹೊಸ ವರ್ಷ ಹೊಸ ನಿಯಮ?!

ಎಲ್ಲರಿಗೂ ನಮಸ್ಕಾರಗಳು ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದೆ ಹಲವು ಬದಲಾವಣೆ ಈ ಹೊಸ ವರ್ಷದ ಹೊಸ ನಿಯಮಗಳು....,, ಹಳೆ ವರ್ಷ ಮರಳಿಬಾರದಂತೆ ಹುರುಳಿ ಹೋಗಿದೆ ,ಜಗತ್ತೇ ಹೊಸ ವರ್ಷಕ್ಕೆ ಹೊರಳಿದೆ .ಬದಲಾಗಿದ್ದು ಬರೀ ಕ್ಯಾಲೆಂಡರ್ ಮಾತ್ರವಲ್ಲ ಅದರ ಹೊರತಾಗಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಆ ಪೈಕಿ ಸಾರ್ವಜನಿಕರ ದೈನಂದಿನ ಜೀವನದ ಮೇಲೆ ಪರಿಣಾಮ ಇರುವಂತಹ ಕೆಲವು ಬದಲಾವಣೆ ಬೆಳವಣಿಗೆಗಳ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ .... * ಆಧಾರ್ ಉಚಿತ ತಿದ್ದುಪಡಿ  : ಆದಾರ್ ವಿವರಗಳನ್ನು ಆನ್ಲೈನಲ್ಲಿ ಉಚಿತವಾಗಿ ಸಕಾಲಿಕಗೊಳಿಸುವ ಗಡುವು ಡಿಸೆಂಬರ್ 31ಕ್ಕೆ ಮುಗಿದಿದೆ. ಇನ್ನೇನಿದ್ದರೂ ಈ ಪ್ರಕ್ರಿಯೆಗೆ ರೂ.50 ಶುಲ್ಕ ವಿಧಿಸಲಾಗುತ್ತದೆ. * ಸಿಮ್ ಕಾರ್ಡ್ ಕೆ ವೈ ಸಿ :  ಮೊಬೈಲ್ ಫೋನ್ ಬಳಕೆದಾರರು ಹೊಸ ಸಿಮ್ ಖರೀದಿಸಬೇಕಾದರೆ ಸಲ್ಲಿಸುವ ಪೇಪರ್ ಆಧರಿತ ಗ್ರಾಹಕರ ವಿವರ ಕೆವೈಸಿ ಡಿಸೆಂಬರ್ 31ಕ್ಕೆ ಕೊನೆಯಾಗಿದೆ .ದೂರ ಸಂಪರ್ಕ ಇಲಾಖೆಯ ನಿಯಮಗಳ ಪ್ರಕಾರ ಜನವರಿ ಒಂದರಿಂದ ಡಿಜಿಟಲ್ ಕೆ ವೈ ಸಿ ಮೂಲಕವೇ ಸಿಮ್ ನೀಡಲಾಗುತ್ತದೆ. * ಸುಕನ್ಯ ಸಮೃದ್ಧಿ ಯೋಜನೆ ಬಡ್ಡಿದರ ಹೆಚ್ಚಳ:  ಸುಕನ್ಯ ಸಮೃದ್ಧಿ ಸೇರಿದಂತೆ ಕೆಲವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ ಹೆಚ್ಚಿಸಿದೆ. ಸುಕನ್ಯ ಸಮೃದ್ಧಿ ಯೋಜನೆ ಯ ಬಡ್ಡಿ ದರ 20 ಮೂಲಾಂಶಗಳಷ್ಟು ಮತ್ತು ಮೂರು ವರ್ಷಗಳ ಅವಧಿ ಠೇವಣಿಯ ಬಡ್ಡಿ ದರ 10 ಮೂಲಾಂಶಗಳಷ್ಟು ಡಿಸೆಂಬರ್ 29ರಂದು ಪರಿಷ್ಕರಿಸಲಾಗಿದೆ.

ಸಿಲಿಂಡರ್ ಸಬ್ಸಿಡಿ ಯೋಜನೆ!!!

ಎಲ್ಲರಿಗೂ ನಮಸ್ಕಾರ,  ಹೊಸ ವರ್ಷದ ಹುಡುಗರೇ ಸಾಕಾರವಾಗುತ್ತಿದೆ ಮೋದಿ ಯವರ ಗ್ಯಾರಂಟಿ!!! 450 ರೂ ಅಡುಗೆ ಅನಿಲ ಸಿಲಿಂಡರ್ ಕೊಡುವುದಾಗಿ ಉಜ್ವಲ ಯೋಜನೆ ಅಡಿಯಲ್ಲಿ ಮೋದಿಯವರು ತಿಳಿಸಿದ್ದಾರೆ. ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ಯೋಜನೆ 2024 ರ ಜನವರಿ ಒಂದರಿಂದ ಆರಂಭವಾಗುತ್ತಿದೆ ಎಂದು ಮೋದಿಯವರು ತಿಳಿಸಿದ್ದಾರೆ. ಉಜ್ವಲ ಮತ್ತು ಇತರ ಬಡ ಕುಟುಂಬಗಳ ಬಿಪಿಎಲ್ ಮಹಿಳೆಯರಿಗೆ ಮಾತ್ರ 450ಕ್ಕೆ ಪ್ರತಿ ತಿಂಗಳು ಒಂದು ಅಡುಗೆ ಅನಿಲ ಸಿಲೆಂಡರ್ ಸಿಗಲಿದೆ. ಈ ಬಿಪಿಎಲ್ ದಾರಾರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತಿವೆ.  ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗ್ಯಾರಂಟಿಗೆ ರಾಜ್ಯ ಸರ್ಕಾರ ಸಹಕಾರ ರೂಪ ನೀಡುತ್ತಿದೆ. ರಾಜಸ್ಥಾನದಲ್ಲಿ ಹೊಸ ವರ್ಷದಿಂದ ಉಜ್ವಲ ಮತ್ತು ಇತರ ಬಡ ಕುಟುಂಬಗಳಿಗೆ ಎಲ್ಲಕ್ಕಿಂತ ಕಡಿಮೆ ದರದಲ್ಲಿ ಅಡುಗೆ ಅನಿಲ ಸಿಲೆಂಡರ್ ಕೇವಲ 450ಗಳಿಗೆ ಸಿಗಲಿದೆ. ಈ ಉಪಕ್ರಮ ಮಹಿಳಾ ಸಬಲೀಕರಣದ ದಿಸೆಯಲ್ಲಿ ಒಂದು ವಿನಮ್ರ ಪ್ರಯತ್ನವಾಗಿದೆ ,ಎಂದು ರಾಜಸ್ಥಾನದಲ್ಲಿನ ಮುಖ್ಯಮಂತ್ರಿಯಾದ ಭಜನ್ ಲಾಲ್ ಶರ್ಮ ರವರು ತಿಳಿಸಿದ್ದಾರೆ. ವರ್ಷದ ಕೊನೆ 'ಮನ್ ಕಿ ಬಾತ್ 'ನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ ಬೆಳೆಯುತ್ತಿರುವ ,ಆತ್ಮವಿಶ್ವಾಸ ಸಾವಲಂಬನೆ ವಿಕಸಿತ ಭಾರತದ ಚೈತನ್ಯ ಈ ವರ್ಷದ ಕೊನೆಯ ಹಾಗೂ ಒಟ್ಟಾರೆ 108ನೇ' ಮನ್ ಕಿ ಬಾತ್ 'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದ ಬೆಳೆಯುತ್ತಿರುವ ಬದ್ಧ

ಚಿನ್ನದ ಬೆಲೆ ಗಗನಕೇರಿದೆ??!!!!!!.....,,

ಎಲ್ಲರಿಗೂ ನಮಸ್ಕಾರ, ಚಿನ್ನದ ಬೆಲೆ ಗಗನಕೆರಿದೆ ಎಂಬುದು ನಮ್ಮ ವಿಷಯವಾಗಿದೆ. ನಿಜವಾಗಲೂ ಚಿನ್ನದ ಬೆಲೆಯನ್ನು ಕೇಳಿದರೆ ನೀವು ಶಾಕ್ ಆಗುವಂತೆ ಖಂಡಿತ. ಚಿನ್ನದ ಬೆಲೆಯಲ್ಲಿ ದಿನ ದಿನ ಬಾರಿ ವ್ಯತ್ಯಾಸವನ್ನು ನೋಡಬಹುದು. ಒಂದು ದಿನ ಕಡಿಮೆ ಒಂದು ದಿನ ಜಾಸ್ತಿ ಆಗುತ್ತಲೇ ಇರಿ ಇದೆ, ಏರಿಳಿತಗಳು ಕಾಣಿಸುತ್ತವೆ. ಹೊಸ ವರ್ಷದಲ್ಲಿ ಚಿನ್ನದ ಮೆರಗು ಇನ್ನಷ್ಟು ಹೆಚ್ಚಲಿದೆ. 2024ರಲ್ಲಿ ಬಂಗಾರದ ಬೆಲೆ 10 ಗ್ರಾಂ ಗೆ ಎಪ್ಪತ್ತೆರಡು ಸಾವಿರದವರೆಗೆ ತಲುಪಬಹುದೆಂದು ಅಂದಾಜು ಮಾಡಲಾಗಿದೆ. ಹಲವು ದೇಶಗಳ ಕೇಂದ್ರೀಯ ಬ್ಯಾಂಕುಗಳು ಅದರಲ್ಲೂ ಪ್ರಮುಖವಾಗಿ ಅಮೆರಿಕದ ಫೆಡರಲ್ ರಿಸರ್ವ್ಸ್ ರೂಪಿಸುವ, ಹಣಕಾಸು ನೀತಿಗಳು ಬೆಲೆ ಏರಿಕೆಗೆ ಮುಖ್ಯ ಅಂಶವಾಗಲಿದೆ .ಇಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಜಾಗತಿಕ ರಾಜಕೀಯ ಸನ್ನಿವೇಶ ಡಾಲರ್ ಸೂಚ್ಯಂಕದಲ್ಲಿನ ಪ್ರವೃತ್ತಿ ಜಾಗತಿಕ ಬೆಳವಣಿಗೆಯ ಬಿರುಸು ಪ್ರಮುಖ ದೇಶಗಳಲ್ಲಿ ಚುನಾವಣೆಗಳಿಂದ ಉಂಟಾದ ಅನಿಶ್ಚಿತ ಪರಿಸ್ಥಿತಿ ಮತ್ತು ಕೇಂದ್ರೀಯ ಬ್ಯಾಂಕ್ ಗಳು ಚಿನ್ನವನ್ನು ಖರೀದಿಸುವ ಈಗಿನ ಪ್ರವೃತ್ತಿ ಮೊದಲಾದವುಗಳು ಬಂಗಾರದ ಭವಿಷ್ಯದ ಆದಿಯನ್ನು ನಿರ್ಧರಿಸಲಿದೆ .2023ರಲ್ಲಿ ಸದೃಢವಾದ ಶೇಕಡ 15ರಷ್ಟು ಗಳಿಕೆಯ ಕಾರ್ಯಕ್ಷಮತೆಯನ್ನು ಆಧರಿಸಿ ಸಂಕೀರ್ಣವಾದ ಬೃಹ ತದ್ವಿ ಆರ್ಥಿಕ ಪರಿಸರದೊಳಗೆ ಚಿನ್ನ 2024ರಲ್ಲಿಯೂ ತನ್ನ ಸ್ಥಾನವನ್ನು ಇನ್ನಷ್ಟು ಭದ್ರ ಪಡಿಸಿಕೊಳ್ಳಲಿದೆ.  ಬಡ್ಡಿ ದರವನ್ನು ಏರಿಸುವ ಕ್ರಮ ಕಾರ್ಯ ನೀತಿಯ ಸುಳಿ