Money Management: ಏನು ಮಾಡಿದರೂ ಹಣಕಾಸು ಸಂಕಷ್ಟ ಕಳೆಯುತ್ತಿಲ್ಲವಾ? ಈ ಟಿಪ್ಸ್ ಅನುಸರಿಸಿ
ಕೈತಪ್ಪಿದ ಕರ್ಚು -
ಬಹಳ ಜನರು ತಮ್ಮ ಖರ್ಚಿನ ಮೇಲೆ ಕಣ್ಣಿಟ್ಟಿರುವುದಿಲ್ಲ. ಏನೂ ಖರ್ಚು ಮಾಡಿಲ್ಲ ಅಂತ ಅನಿಸಿದರೂ ಸಾಕಷ್ಟು ವೆಚ್ಚ ಮಾಡಿರುತ್ತಾರೆ. ಅಪರೂಪಕ್ಕೆ ನೋಡುವ ವಿವಿಧ ವಾಹಿನಿಗಳು, ಒಟಿಟಿಗಳಿಗೆ ಸಬ್ಸ್ಕ್ರೈಬ್ ಆಗಿರುತ್ತಾರೆ. ಅನಗತ್ಯವಾಗಿ ಮೊಬೈಲ್ ನಂಬರ್ಗಳನ್ನು ಇಟ್ಟುಕೊಂಡು ಅದಕ್ಕೆ ಡಾಟಾ ತುಂಬಿಸಲು ಹಣ ವ್ಯಯಿಸುವುದುಂಟು. ಹೀಗೆ ನಮಗೆ ಗೊತ್ತಿಲ್ಲದೆ ಸಾಕಷ್ಟು ಅನಗತ್ಯ ವೆಚ್ಚ ಮಾಡುತ್ತಿರುತ್ತೇವೆ.
ಈ ಅನಗತ್ಯ ಖರ್ಚನ್ನು ಗುರುತಿಸಬೇಕೆಂದರೆ ಪ್ರತೀ ದಿನವೂ ನಿಮ್ಮ ವೆಚ್ಚದ ವಿವರವನ್ನು ದಾಖಲಿಸಲು ಶುರು ಮಾಡಿ. ಒಂದು ತಿಂಗಳ ಬಳಿಕ ಎಲ್ಲಾ ಖರ್ಚುಗಳನ್ನು ವರ್ಗೀಕರಣ ಮಾಡಿ. ಯಾವ್ಯಾವುದಕ್ಕೆ ಎಷ್ಟೆಷ್ಟು ಖರ್ಚಾಗಿದೆ ಎಂಬ ಸ್ಪಷ್ಟ ವಿವರ ನಿಮಗೆ ಸಿಗುತ್ತದೆ. ಅದರಲ್ಲಿ ಅನಗತ್ಯ ವೆಚ್ಚ ಯಾವುದು, ಯಾವ ವೆಚ್ಚವನ್ನು ಉಳಿಸಬಹುದು ಎಂಬುದನ್ನು ನಾವು ತಿಳಿಯಲು ಸಾಧ್ಯವಾಗುತ್ತದೆ.
ವರಮಾನ ಹೆಚ್ಚಿಸಲು ಪ್ರಯತ್ನಿಸಿ -
ನಾವು ಸಾಮಾನ್ಯವಾಗಿ ಒಂದೇ ಕೆಲಸದಲ್ಲಿ ಅಥವಾ ಉದ್ಯೋಗದಲ್ಲಿ ನಿರತರಾಗಿರುತ್ತೇವೆ. ಮಧ್ಯದಲ್ಲಿ ಬೇರೆ ಆದಾಯ ತರುವ ಬಿಸಿನೆಸ್ ಅಥವಾ ಉದ್ಯೋಗ ಸಾಧ್ಯವೇ ಎಂದು ಅವಲೋಕಿಸಿ. ನಿಮ್ಮ ಉದ್ಯೋಗದಲ್ಲಿ ಉನ್ನತ ಹಂತಕ್ಕೆ ಬಡ್ತಿ ಸಿಗಲು ಬೇಕಾದ ಕೌಶಲ್ಯ ಏನು ಎಂದು ಅರಿತು ಅದರನ್ನು ಪಡೆಯಲು ಪ್ರಯತ್ನಿಸಿ.
ಅಥವಾ, ಬಿಡುವಿನ ಸಮಯದಲ್ಲಿ ಫ್ರೀಲಾನ್ಸ್ ಕೆಲಸ ಮಾಡಲು ಸಾಧ್ಯವೇ ಎಂಬುದನ್ನು ನೋಡಿ. 50,000 ರೂ ಸಂಬಳ ಬರುತ್ತಿದ್ದರೆ, ಅದರ ಜೊತೆಗೆ ಹೆಚ್ಚುವರಿ 20,000 ರೂ ಆದಾಯ ಬಂದರೆ ಸಾಕಷ್ಟು ಉಪಯೋಗ ಆಗುತ್ತದೆ.
ಆದಾಯ ಹೆಚ್ಚಿದರೆ ಖರ್ಚೂ ಹೆಚ್ಚಿಸಬಾರದ್ದು -
ಇದು ಬಹಳ ಮುಖ್ಯ. ಬಹಳ ಜನರು ಆದಾಯ ಹೆಚ್ಚಾಗುತ್ತಿರುವಂತೆಯೇ ಅದಕ್ಕೆ ತಕ್ಕಂತ ಬೇರೆ ಬೇರೆ ಕಮಿಟ್ಮೆಂಟ್ ಮಾಡಿಕೊಳ್ಳುತ್ತಾರೆ. ಇದು ತಪ್ಪು. ಅಗತ್ಯಗಳಿಗೆ ಮಾತ್ರ ನಿಮ್ಮ ಖರ್ಚು ಇರಲಿ.
ಸಾಲ ತೀರಿಸಲು ಮೊದಲ ಆದ್ಯತೆ -
ನೀವು ಹಣಕಾಸು ಸಂಕಷ್ಟದಿಂದ ಹೊರಬರಲು ಸಾಲದಿಂದ ಹೊರಬರುವುದು ಮುಖ್ಯ. ಯಾವುದೇ ಕಾರಣಕ್ಕೂ ಸಾಲದ ಶೂಲಕ್ಕೆ ಸಿಲುಕಬೇಡಿ. ಕ್ರೆಡಿಟ್ ಕಾರ್ಡ್ಗಳ ಗೋಜಲುಗಳ ಬಗ್ಗೆ ಎಚ್ಚರ ಇರಲಿ. ಸಾಲ ಇದ್ದರೆ ಅದನ್ನು ತೀರಿಸುವುದು ನಿಮ್ಮ ಮೊದಲ ಆದ್ಯತೆ ಆಗಿರಬೇಕು. ಅಲ್ಲಿಯವರೆಗೆ ನಿಮ್ಮ ಆಸೆಗಳನ್ನು ಅದುಮಿಟ್ಟುಕೊಳ್ಳುವುದು ಉತ್ತಮ.
ಹೂಡಿಕೆ ಮಾಡಿ -
ನಿಮಗೆ ಬರುವ ಆದಾಯದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಭಾಗವನ್ನು ಉಳಿಸಿ ಅಷ್ಟನ್ನೂ ಹೂಡಿಕೆ ಮಾಡಿ. ನಿಮ್ಮ ಹೂಡಿಕೆ ಒಂದೇ ಕಡೆ ಇರುವ ಬದಲು ವೈವಿಧ್ಯತೆ ಇರಲಿ.
ಆರ್ಡಿ, ಎಫ್ಡಿಗಳಿಗೆ ಕೆಲವಿಷ್ಟು ಹಣ ವಿನಿಯೋಗವಾಗಲಿ. ಪಿಪಿಎಫ್, ಸಾವರೀನ್ ಗೋಲ್ಡ್ ಬಾಂಡ್, ಮ್ಯುಚುವಲ್ ಫಂಡ್ಗಳಲ್ಲಿ ನಿಮ್ಮ ಹೂಡಿಕೆಗಳಿರಲಿ. ಮ್ಯುಚುವಲ್ ಫಂಡ್ನಲ್ಲೇ ಬೇರೆ ಬೇರೆ ವಿಭಾಗದ ಫಂಡ್ಗಳಿಗೆ ನಿಮ್ಮ ಹೂಡಿಕೆ ವ್ಯಾಪಿಸಿರಲಿ.
ಧನ್ಯವಾದಗಳು
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ