ಹೊಸ ವರ್ಷ ಹೊಸ ನಿಯಮ?!
ಎಲ್ಲರಿಗೂ ನಮಸ್ಕಾರಗಳು ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದೆ ಹಲವು ಬದಲಾವಣೆ ಈ ಹೊಸ ವರ್ಷದ ಹೊಸ ನಿಯಮಗಳು....,, ಹಳೆ ವರ್ಷ ಮರಳಿಬಾರದಂತೆ ಹುರುಳಿ ಹೋಗಿದೆ ,ಜಗತ್ತೇ ಹೊಸ ವರ್ಷಕ್ಕೆ ಹೊರಳಿದೆ .ಬದಲಾಗಿದ್ದು ಬರೀ ಕ್ಯಾಲೆಂಡರ್ ಮಾತ್ರವಲ್ಲ ಅದರ ಹೊರತಾಗಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಆ ಪೈಕಿ ಸಾರ್ವಜನಿಕರ ದೈನಂದಿನ ಜೀವನದ ಮೇಲೆ ಪರಿಣಾಮ ಇರುವಂತಹ ಕೆಲವು ಬದಲಾವಣೆ ಬೆಳವಣಿಗೆಗಳ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ .... * ಆಧಾರ್ ಉಚಿತ ತಿದ್ದುಪಡಿ : ಆದಾರ್ ವಿವರಗಳನ್ನು ಆನ್ಲೈನಲ್ಲಿ ಉಚಿತವಾಗಿ ಸಕಾಲಿಕಗೊಳಿಸುವ ಗಡುವು ಡಿಸೆಂಬರ್ 31ಕ್ಕೆ ಮುಗಿದಿದೆ. ಇನ್ನೇನಿದ್ದರೂ ಈ ಪ್ರಕ್ರಿಯೆಗೆ ರೂ.50 ಶುಲ್ಕ ವಿಧಿಸಲಾಗುತ್ತದೆ. * ಸಿಮ್ ಕಾರ್ಡ್ ಕೆ ವೈ ಸಿ : ಮೊಬೈಲ್ ಫೋನ್ ಬಳಕೆದಾರರು ಹೊಸ ಸಿಮ್ ಖರೀದಿಸಬೇಕಾದರೆ ಸಲ್ಲಿಸುವ ಪೇಪರ್ ಆಧರಿತ ಗ್ರಾಹಕರ ವಿವರ ಕೆವೈಸಿ ಡಿಸೆಂಬರ್ 31ಕ್ಕೆ ಕೊನೆಯಾಗಿದೆ .ದೂರ ಸಂಪರ್ಕ ಇಲಾಖೆಯ ನಿಯಮಗಳ ಪ್ರಕಾರ ಜನವರಿ ಒಂದರಿಂದ ಡಿಜಿಟಲ್ ಕೆ ವೈ ಸಿ ಮೂಲಕವೇ ಸಿಮ್ ನೀಡಲಾಗುತ್ತದೆ. * ಸುಕನ್ಯ ಸಮೃದ್ಧಿ ಯೋಜನೆ ಬಡ್ಡಿದರ ಹೆಚ್ಚಳ: ಸುಕನ್ಯ ಸಮೃದ್ಧಿ ಸೇರಿದಂತೆ ಕೆಲವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ ಹೆಚ್ಚಿಸಿದೆ. ಸುಕನ್ಯ ಸಮೃದ್ಧಿ ಯೋಜನೆ ಯ ಬಡ್ಡಿ ದರ 20 ಮೂಲಾಂಶಗಳಷ್ಟು ಮತ್ತು ಮೂರು ವರ್ಷಗಳ ಅವಧಿ ಠೇವಣಿಯ ಬಡ್ಡಿ ದರ 10 ಮೂಲಾಂಶಗಳಷ್ಟು ಡಿಸೆಂಬರ್ 29ರಂದು ಪರಿಷ್ಕರಿಸಲಾಗಿದೆ.